ಹೊಸಬೆಳಕು

ಛೇ ಛೇ ಅಸ್ತವ್ಯಸ್ತ ಅಶ್ಲೀಲ
ಹಿಂಸೆ ಕ್ರೌರ್ಯದ ಖಂಡನೆ

ಉಪ್ಪುಂಡ ದೇಹದ
ಬಯಕೆಯ ನಾಗಾಲೋಟಕೆ
ತಡೆವುಂಟೆ?

ತರುಣ ತರುಣಿಯರ ಸುಪ್ತಬಯಕೆ
ಹೆಪ್ಪುಗಟ್ಟಿ ತಡೆಯದೇ
ಅಡ್ಡ ಹಿಡಿದ ಮನ
ಪಥ ಭ್ರಮಣೆಯಾಗಿ ರಸ್ತೆಗಿಳಿದು
ಹಾಕಿತು ಪ್ರೇಮದ ಸೋಗು

ಬಿಗಿ ಜಿನ್ ಮಿನಿಸ್ಕರ್ಟ್
ತೊನೆಯುವ ಮುಖ
ಕುಣಿಯುವ ಎದೆ ಕೆಂದುಟಿ
ಕೆದಕಿ, ಕುಣಿಸಿ ಒಳಗೊಳಗೆ
ಬೆಂಕಿ ಹೊತ್ತಿಸಿ
ಮನದಲಿ ಬಿರುಕು ಮೂಡಿಸಿ
ಅತ್ಯಾಚಾರ ಕೀಳು ಕಾಮದ
ಆಕ್ಟೋಪಸ್ ಹಿಡಿತದಲಿ
ತೀವ್ರ ಸಂವೇದನೆಯ
ಕುಡಿತ, ಬ್ಲೂಫಿಲಂ, ಡ್ರಗ್ಸ್
ವೇಶ್ಯಾವಾಟಿಕೆಗೆ ಬಲಿಯಾಗಿ
ಆದರ್ಶದ ಭದ್ರಕೋಟೆ
ಬಿರುಕು ಬಿಟ್ಟು
ದುರಂತಕ್ಕಪ್ಪುವುದು.

ಹೆಣ್ಣು ಹೊನ್ನು ಮಣ್ಣು
ಮಾಯೆಯೋ? ಅಲ್ಲ;
ಹಿಡಿತವಿಲ್ಲದಾ ಮನದ
ಆಸೆಯೇ ಮಾಯೆ.

ಕೀಳು ಕಾಮನೆಗಳ ಹತ್ತಿಕ್ಕಿದರೆ
ಆತ್ಮವಿಶ್ವಾಸದ ಹೊಸ ಬೆಳಕು
ಬಂದೀತು ಮೂಡಿ
ನಿರ್ಮಾಣವಾದೀತು
ಸಮಾಜದ ಸುಭದ್ರ ಕೋಟೆ
*****
೨೬-೧೦-೨೦೦೮ ರ ಕರ್‍ಮವೀರದಲ್ಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನದುದ್ದ
Next post ಯಾರು?

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys